ಶ್ರೀಮಂಗಲ ಸಮೀಪದ ತಾವಳಗೆರೆಯ ಹೆದ್ದಾರಿಯಲ್ಲಿ ಪಾದಚಾರಿಗೆ ವಾಹನ ಡಿಕ್ಕಿ : ಅಪರಿಚ ವ್ಯಕ್ತಿ ಸ್ಥಳದಲ್ಲೇ ಸಾವು
ಮಡಿಕೇರಿ : ಪೊನ್ನಂಪೇಟೆ ಶ್ರೀಮಂಗಲ ಮುಖ್ಯ ರಸ್ತೆಯಲ್ಲಿ ತಾವಳಗೆರೆ ಗ್ರಾಮದ ಆಂಡಮಾಡಾ ಅರುಣ ರವರ ಮನೆ ಮುಂಭಾಗದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದ ಚಾರಿಗೆ ವಾಹನವೊಂದು ಡಿಕ್ಕಿ ಪಡಿಸಿ ಹೋಗಿದ್ದು, ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆನ್ನೆ ತಡರಾತ್ರಿ ನಡೆದಿದೆ.
ಸ್ಥಳಕ್ಕೆ ಶ್ರೀಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿ,ಅಂದಾಜು 50 ವರ್ಷ, ಎತ್ತರ 5.2 ಅಡಿ,ಕಪ್ಪು ಬಿಳುಪು ತಲೆ ಕೂದಲು ಇದ್ದು, ಕುರುಚಲು ಗಡ್ಡ ಮೀಸೆ,ಕೋಲು ಮುಖ,ಹೆಣ್ಣಿಗೆಂಪು ಬಣ್ಣ,ಸಾಧಾರಣ ಮೈಕಟ್ಟು. ಎರಡು ಮೊಣಕಾಲಿನ ಬಿಳಿ ತೊನ್ನು ಮಚ್ಚೆ ಇರುತ್ತೆ.
ಒಂದು ಆಕಾಶ ನೀಲಿ ಬಣ್ಣದ ತುಂಬುತೋಳಿನ ರೆಡಿಮೇಡ್ ಶರ್ಟು, ಕಾಫಿ ಬಣ್ಣದ ರೆಡಿಮೇಡ್ ಪ್ಯಾಂಟ್ ಧರಿಸಿರುತ್ತಾನೆ ತಲೆ ಹಿಂಬದಿಯಲ್ಲಿ ರಕ್ತಕಾಯವಾಗಿದ್ದು
ಈ ಅಪರಿಚಿತ ವ್ಯಕ್ತಿಯ ಬಗ್ಗೆ ಹೆಸರು ವಿಳಾಸ ಸಂಬಂಧಿಕರಿಗೆ ಗೊತ್ತಾದಲ್ಲಿ ಕೂಡಲೇ ಶ್ರೀಮಂಗಲ ಪೊಲೀಸ್ ಠಾಣೆ ಎಚ್ಎಸ್ಓ ಅವರಿಗೆ ಮಾಹಿತಿ ನೀಡಲು ಕೋರಿದೆ
08274246246
9480804960
+919742297638








