*ಜನವಾಹಿನಿ ಬ್ರೇಕಿಂಗ್*
ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ
*ನೆನ್ನೆಯಷ್ಟೇ ಬೈಕ್ ಸವಾರನ ಮೇಲೆ ದಾಳಿ ಮಾಡಿದ ಪ್ರಕರಣ ವರದಿಯಾಗಿತು.*
*ಅದರ ಬೆನ್ನಲ್ಲೇ ಇಂದು ಬೆಳಗ್ಗೆ ಆಟೋ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ*
*ಇಂಜಲಗೆರೆ ಮುತ್ತಪ್ಪ ದೇವಾಲಯದ ಸಮೀಪ ನಡೆದ ಘಟನೆ.*
*ಆಟೋದಲ್ಲಿದ್ದ ಪ್ರಯಾಣಿಕ ಪುಲಿಯೇರಿ ಗ್ರಾಮದ ಪ್ರದೀಪ್ ಎಂಬುವವರ ತೊಡೆಯ ಭಾಗಕ್ಕೆ ಗಾಯ*
*ಇಂಜಲಗೆರೆ ಫಿರೋಜ್ ಎಂಬುವವರಿಗೆ ಸೇರಿದ ಆಟೋದ ಮೇಲೆ ಎರಗಿದ ಕಾಡಾನೆ*
*ಆಟೋದ ಮೇಲೆ ದಂತದಿಂದ ತಿವಿದ ಪರಿಣಾಮ ಆಟೋ ಎಡಭಾಗ ದ್ವಂಸ.*
*ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ಗಾಯಾಳು ರವಾನೆ*
*ಆಟೋ ಚಾಲನೆಯಲ್ಲಿದ್ದ ಪರಿಣಾಮ ತಪ್ಪಿದ ಭಾರಿ ಅನಾಹುತ.*
*ಆನೆ ದಾಳಿಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತ.*
*ಆನೆ ದಾಳಿ ಪ್ರಕರಣ ಪ್ರತಿನಿತ್ಯ ನಡೆಯುತ್ತಿದ್ದರು ಇಲಾಖೆಯಿಂದ ಶಾಶ್ವತ ಪರಿಹಾರವಿಲ್ಲವೆಂದು ಆರೋಪ*
*ಬೆಳ್ಳಂ ಬೆಳಗ್ಗೆ ನಡೆದ ಘಟನೆಯಿಂದ ಶಾಲಾ ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ .*








