ಜನವಾಹಿನಿ News ಪೊನ್ನಂಪೇಟೆ : ಪೊನ್ನಂಪೇಟೆಯ ನಿವಾಸಿ ಕೊಡುಗೈದಾನಿ ಪುಚ್ಚಿಮಡ ದಿವಂಗತ ಬೊಪಯ್ಯ ಅವರ ಜೇಷ್ಠ ಪುತ್ರ ಹಿರಿಯ ಹಾಕಿ ತರಬೇತಿದಾರರು, ಸಮಾಜ ಸೇವಕರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಆದ ಪುಚ್ಚಿಮಡ ಹರೀಶ್ ಅನಾರೋಗ್ಯದಿಂದ ಇಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪತ್ನಿ, ಸೇರಿದಂತೆ ಇಬ್ಬರು ಪುತ್ರಿಯರು ಓರ್ವ ಪುತ್ರ, ಸಹೋದರ ಹಾಗು ಕುಟುಂಬ ವರ್ಗದವರು, ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಪೊನ್ನoಪೇಟೆಯಲ್ಲಿ ಟ್ಯುಟೋರಿಯಲ್ ನಡೆಸುತ್ತಿದ್ದ ಸಂದರ್ಭ ಹಲವರಿಗೆ ವಿದ್ಯಾ ಧಾನವನ್ನು ಮಾಡಿದ್ದಾರೆ. ಸ್ವತಹ ಹಾಕಿ ಪಟ್ಟುವಾದ ಇವರು ಅಂದಿನ ದಿನಗಳಲ್ಲಿ ಹಲವು ತಂಡಗಳಲ್ಲಿ ಮುಂಚೂಣಿ ಆಟಗಾರರಾಗಿದ್ದರು. ನಂತರ ಪೊನ್ನಂಪೇಟೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ಒಲಂಪಿಯನ್ ಸಿ.ಎಸ್ ಪೂಣಚ್ಚ ಸೇರಿದಂತೆ, ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ರಿಕ್ಕಿ ಗಣಪತಿ,ಉತ್ತಯ್ಯ, ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ಮೊದಲ ಗುರುವಾಗಿ, ತರಬೇತಿದಾರರಾಗಿದ್ದರು. ಕೊಡಗು ಜಿಲ್ಲೆಯ ತೀರ್ಪುಗಾರಿಗೆ, ತರಬೇತಿದರಾರಿಗೆ ಸೇವಿಸಲಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ಸ್ಥಾಪಿಸುವಲ್ಲಿ ಕಾರಣಕರ್ತರಾದವರಲ್ಲಿ ಇವರು ಒಬ್ಬರಾಗಿದ್ದಾರೆ. ಎರಡು ದಶಕಗಳ ಹಿಂದೆ ಪೊನ್ನಂಪೇಟೆ ಪ್ರತ್ಯೇಕ ತಾಲೂಕು ಹೋರಾಟವನ್ನು ಆರಂಭಿಸಲು ಕಾರಣಕರ್ತರಾದ ಇವರು ಅಂದಿನ ದಿನಗಳಲ್ಲಿ ಇವರ ಮನೆಯಲ್ಲೇ ಹಲವು ಬಾರಿ ಸಮಿತಿ ಸಭೆಯನ್ನು ಚೆಪ್ಪುಡೀರ ಅರುಣ್ ಮಾಚಯ್ಯನವರ ನೇತೃತ್ವದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಪೊನ್ನಂಪೇಟೆಯ ನ್ಯಾಯಾಲಯ ಸ್ಥಾಪನೆಯ ಸಂದರ್ಭ ಕೂಡ ಇವರು ಕೈಜೋಡಿಸಿದ್ದರು.
ಮಾಜಿ ಸಚಿವರಾದ ಎಂ. ಸಿ ನಾಣಯ್ಯ ನವರ ಒಡನಾಡಿಯಗಿ ಇವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.
ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿ ಬಡ ವಿದ್ಯಾರ್ಥಿಗಳಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದರು.ಕೊಡವ ಸಮಾಜ, ಐಟಿಐ ಸಂಸ್ಥೆ ಇನ್ನು ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲಿಸಿದ್ದಾರೆ.
ಪೊನ್ನಂಪೇಟೆ ಬಾಗದ ಹಾಕಿ ಮಾಂತ್ರಿಕ ಎಂಬ ಹೆಸರನ್ನು ಕೂಡ ಗಳಿಸಿದ್ದರು. ಕಳೆದ 10 ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದರು. ಇದೀಗ ಮೈಸೂರು ನಾರಾಯಣ ಹೃದ್ರಾಲಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರ ಅಂತಿಮ ಸಂಸ್ಕಾರ ನಾಳೆ ಪೊನ್ನಂಪೇಟೆಯ ಅವರ ಕುಟುಂಬದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.







