Breaking News :

ಕಾಯ೯ಪ್ಪ ಪ್ರತಿಮೆ ಶುಚಿಗೊಳಿಸಿ ಕಾಗಿ೯ಲ್ ವಿಜಯ್ ದಿವಸ್ ಆಚರಿಸಿದ ಕೊಡಗು ವಿದ್ಯಾಲಯದ ಕೆಡೆಟ್ ಗಳು

ಕಾಯ೯ಪ್ಪ ಪ್ರತಿಮೆ ಶುಚಿಗೊಳಿಸಿ ಕಾಗಿ೯ಲ್ ವಿಜಯ್ ದಿವಸ್ ಆಚರಿಸಿದ ಕೊಡಗು ವಿದ್ಯಾಲಯದ ಕೆಡೆಟ್ ಗಳು

ಮಡಿಕೇರಿ: ಕೊಡಗು ವಿದ್ಯಾಲಯದ ಎನ್ ಸಿ ಸಿ ಘಟಕದ ವತಿಯಿಂದ ನಗರದಲ್ಲಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಪ್ರತಿಮೆ ಶುಚಿಗೊಳಿಸುವುದರ ಮೂಲಕ ಕಾರ್ಗಿಲ್ ವಿಜಯ ದಿವಸ್ ನ್ನು ಆಚರಿಸಲಾಯಿತು. 

ಕೊಡಗು ವಿದ್ಯಾಲಯದ ಎನ್ ಸಿ ಸಿ ಕೆಡೆಟ್ ಗಳು ಪ್ರತಿಮೆಯನ್ನು ಶುಚಿಗೊಳಿಸಿ, ಆವರಣದ ಸುತ್ತ ಬೆಳೆದಿದ್ದ ಕಾಡು ಸಸಿಗಳನ್ನು ಕಿತ್ತು, ಗುಡಿಸಿ ಶುಚಿಗೊಳಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಕೆ ಎಸ್ , ಆಡಳಿತ ಅಧಿಕಾರಿ ರವಿ ಪಿ ನೆರವೇರಿಸಿದರು. ಶಾಲೆಯ ಎನ್ ಸಿ ಸಿ ಅಧಿಕಾರಿ ಮೇಜರ್ ದಾಮೋದರ ಗೌಡ ಹಾಗೂ ಎನ್ ಸಿ ಸಿ ಸಿಬ್ಬಂದಿಗಳು ಹಾಜರಿದ್ದರು.

Share this article

ಟಾಪ್ ನ್ಯೂಸ್

More News